exam notes
History of Ancient India, Foreign attacks.ವಿದೇಶೀ ದಾಳಿಗಳು.
- Get link
- Other Apps
History of Ancient India, Foreign attacks.ವಿದೇಶೀ ದಾಳಿಗಳು
👉 Indian and Karnataka History Notes in Kannada
👉Madguy Indian Geography PDF Book By MadGuy Lab
👉Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು
👉ವಿರುದ್ಧಾರ್ಥಕ ಪದಗಳು Opposite Words In Kannada
👉DAILY CURRENT AFFAIRS AND GK NOTES PDF VERY USEFUL FOR ALL COMPETITIVE EXAMS DOWNLOAD PDF
👉PDF]General knowledge PDF Download
👉 ಭೂಗೋಳಶಾಸ್ತ್ರ ಬಹು ಆಯ್ಕೆಯ ಪ್ರಶ್ನೋತ್ತರಗಳ PDF Useful for SDA and FDA, PDO COMPETITIVE EXAMS DOWNLOAD PDF
👉 ಗಡಿನಾಡು ಕೋಚಿಂಗ್ ಸೆಂಟರ್ ದವರು ಸಿದ್ಧಪಡಿಸಿದ ಸಾಮಾನ್ಯ ಜ್ಞಾನ ನೋಟ್ಸ್
👉 10th Edege Bidda Akshara Kannada Notes | 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್
👉 ಸ್ವಾತಂತ್ರ್ಯ ಹೋರಾಟದ ಆಯ್ದ ಪ್ರಮುಖ ರಸಪ್ರಶ್ನೆಗಳು.
👉 ಇಲ್ಲಿಯವರೆಗೆ ನಡೆದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ಇಸ್ವಿಗಳ ಪ್ರಶ್ನೋತ್ತರಗಳು.
👉 ಆಧುನಿಕ ಭಾರತದ ಇತಿಹಾಸ ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರ್ನರಗಳು
👉 ಪ್ರಾಚೀನ ಭಾರತ ಇತಿಹಾಸದ ಪ್ರಮುಖ ವಿಶೇಷ ಅಂಶಗಳು
👉 ಪ್ರಾಚೀನ ಭಾರತದ ಇತಿಹಾಸ ಮಹಾಜನಪದಗಳು ಮತ್ತು ಗಣರಾಜ್ಯ.
👉 ಪ್ರಾಚೀನ ಭಾರತದ ಇತಿಹಾಸ ಬೌದ್ಧ ಧರ್ಮ
History of Ancient India, Foreign attacks.ವಿದೇಶೀ ದಾಳಿಗಳು.
ಭಾರತದ ಮೇಲೆ ವಿದೇಶೀ ದಾಳಿಗಳು
ಪ್ರಾಚೀನ ಕಾಲದಲ್ಲಿ ಭಾರತವು ಅನೇಕ ಬಾರಿ ವಿದೇಶಿ ದಾಳಿಗಳಿಗೆ ಗುರಿಯಾಗಿದೆ. ಪ್ರಮುಖ ದಾಳಿಗಳು ಈ ಕೆಳಗಿನಂತಿವೆ.
ಸಾಮಾನ್ಯ ಶಕ ಪೂರ್ವ 518 ರಿಂದ 486 ಪರ್ಶಿಯಾದ ದೊರೆ ಡೇರಿಯಸ್ ವಾಯುವ್ಯ ಭಾರತದ ಮೇಲೆ ದಾಳಿ ಮಾಡಿದ.
ಗ್ರೀಕ್ ದೇಶ ಮ್ಯಾಸಿಡೋನಿಯಾದ ದೊರೆಯಾದ ಅಲೆಕ್ಸಾಂಡರನು ಸಾಮಾನ್ಯ ಶಕ ಪೂರ್ವ 326 ರಲ್ಲಿ ಭಾರತದ ಮೇಲೆ ದಾಳಿ ಮಾಡಿದನು. ತಕ್ಷಶಿಲೆಯ ದೊರೆಯಾಗಿದ್ದ ಅಂಬಿಯು ಯುದ್ಧ ಮಾಡದೆ ಶರಣಾಗತನಾದನು.
ಪಂಜಾಬಿನ ದೊರೆಯಾದ ಪೋರಸನೋ ದಿಟ್ಟತನದಿಂದ ಅಲೆಕ್ಸಾಂಡರನ ದಾಳಿಯನ್ನು ಎದುರಿಸಿದರೂ ಸೋತು ಸೆರೆಹಿಡಿಯಲ್ಪಟ್ಟರು. ಆದರೆ ಪೋರಸನ ದಿಟ್ಟತನಕ್ಕೆ ಮೆಚ್ಚಿ ಅಲೆಕ್ಸಾಂಡರನು ಅವನ ಸಾಮ್ರಾಜ್ಯವನ್ನು ಅವನಿಗೆ ಹಿಂದುರಿಗಿಸಿದರು.
ಈ ವಿಜಯದ ನಂತರ ತನ್ನ ದಂಡಯಾತ್ರೆಯನ್ನು ಮತ್ತು ಪೂರ್ವಕ್ಕೆ ಮುಂದುವರಿಸಲು ಅಲೆಕ್ಸಾಂಡರನು ಉತ್ಸುಕರಾಗಿದ್ದರು. ಆದರೆ ಅವನ ಸೈನಿಕರು ತಮ್ಮ ದೇಶಬಿಟ್ಟು ಬಹಳ ವರ್ಷಗಳ ಆಗಿದ್ದುದರಿಂದ ಹಿಂದುರುಗಲು ಬಯಸಿ ಯುದ್ಧವನ್ನು ಮುಂದುವರಿಸಲು ನಿರಾಕರಿಸಿದರು.ಆದುದರಿಂದ ಅವನು ಭಾರತದ ಮೇಲೆ ದಾಳಿ ಮುಂದುವರಿಸದೆ ಹಿಂದಿರುಗಿದನು.
ಸಾಮಾನ್ಯ ಶಕ ಪೂರ್ವ 190. ಇಂಡೋ ಗ್ರೀಕರು ಅಥವಾ ಬ್ಯಾಕ್ಟರಿಯನ್ನರು ವಾಯುವ್ಯ ಭಾರತವನ್ನು ಆಕ್ರಮಿಸಿ ಸಾಮ್ರಾಜ್ಯ ಸ್ಥಾಪನೆ ಮಾಡಿದರು.
ಸಾಮಾನ್ಯ ಶಕ ಪೂರ್ವ 180 ರಿಂದ 165 ಇಂಡೋ ಗ್ರೀಕ್ ದೊರೆ ಡೆಮಿಟ್ರಿಯಸ್ ಆಳ್ವಿಕೆ ಸಾಮಾನ್ಯ ಶಕ ಪೂರ್ವ 155 ರಿಂದ 130 ಇಂಡೋ ಗ್ರೀಕರ ದೊರೆ ಮಿನಾಂಡರ್ ಅಥವಾ ಮಿಳಿಂದ ಪನ್ಹಾ ಬೌದ್ಧ ಸನ್ಯಾಸಿ ನಾಗಾರ್ಜುನನಿಂದ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದನು. ಇವನ ರಾಜಧಾನಿ ಶಕಲ.
ಸಾಮಾನ್ಯ ಶಕ ಪೂರ್ವ 90 ರಲ್ಲಿ ಶಕರು ಭಾರತದ ಮೇಲೆ. ದಾಳಿ ಮಾಡಿ ಪಂಜಾಬ್, ಮಥುರಾ, ಪಶ್ಚಿಮ ಹಾಗೂ ಮಧ್ಯಭಾರತದಲ್ಲಿ ನಾಲ್ಕು ಸಾಮ್ರಾಜ್ಯಗಳನ್ನು ಸ್ಥಾಪಿಸಿದರು. ಮಹಾ ಪಾಣಿ ಹಾಗೂ ರುದ್ರದಾಮನ್ (ಜುನಾಗಡ್ ಶಾಸನ ಖ್ಯಾತಿಯ) ಈ ವಂಶದ ಪ್ರಮುಖ ದೊರೆಗಳು.
ಸಾಮಾನ್ಯ ಶಕ ಪೂರ್ವ 58. ಉಜ್ಜಯಿನಿಯ ವಿಕ್ರಮಾದಿತ್ಯ ಎಂಬ ದೊರೆ ಶಕರ ಮೇಲಿನ ವಿಜಯದ ನೆನಪಿಗಾಗಿ ವಿಕ್ರಮ ಶಕವನ್ನು ಆರಂಭಿಸಿದ.
ಸಾಮಾನ್ಯ ಶಕದ ಆರಂಭದಲ್ಲಿ ಪಾರ್ಥಿಯನ್ನರು ಅಥವಾ ಪಹ್ಲವರು ಮೇಲೆ ದಾಳಿ ಮಾಡಿದರು. ಗೊಂಡೋಫರ್ನಸ್ ಈ ವಂಶದ ಪ್ರಮುಖ ದೊರೆ.
ಸಾಮಾನ್ಯ ಶಕ 45 ರಲ್ಲಿ ಕುಶಾನರು ಅಥವಾ ಯೂಚಿಗಳು ಭಾರತವನ್ನು ಆಕ್ರಮಿಸಿದರು. ಪುರುಷಪುರ ಅಥವಾ ಪೇಶಾವರ ಇವರ ರಾಜಧಾನಿ. ಕಾನಿಷ್ಕ ಈ ವಂಶದ ಖ್ಯಾತ ದೊರೆ. ಇವನು. ಸಾಮಾನ್ಯ ಶಕ 78 ರಲ್ಲಿ ಶಕ ಯುಗವನ್ನು ಆರಂಭಿಸಿದವನು. ಕಾಶ್ಮೀರದಲ್ಲಿ ನಡೆದ 4ನೇ ಬೌದ್ಧ ಸಮ್ಮೇಳನದ ಆಶ್ರಯದಾತ. ಭಾರತ ಹಾಗೂ ಗ್ರೀಕ್ ಕಲೆಗಳ ಸಮ್ಮಿಶ್ರಣ ಶೈಲಿಯಾದ ಗಾಂಧಾರ ಶೈಲಿಯ ಶಿಲ್ಪಕಲೆ ಇವನ ಕಾಲದಲ್ಲಿ ತಕ್ಷಶಿಲೆಯಲ್ಲಿ ಆರಂಭವಾಯಿತು.
- Get link
- Other Apps
Comments
Post a Comment